(ಚಿತ್ರ ಕೃಪೆ : ಅಂತರ್ಜಾಲ)
“ಇಲ್ಲಾ
ಸರ್, ಆ ಹುಡುಗಿ ಇವನನ್ನ
ತಿರುಗಿ ಕೂಡ ನೋಡ್ತಾ ಇರಲಿಲ್ಲ,
ಇವನೆ ಇಲ್ಲದೆಲ್ಲ ಕಲ್ಪನೆ ಮಾಡಿಕೊಂಡು ಏನೇನೊ
ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ಸರ್.”
ಅಂತ ಹೇಳಿ ಆ ಕಾಲೇಜು
ಹುಡುಗ ಮಾತು ನಿಲ್ಲಿಸಿದ ಪಕ್ಕದಲ್ಲಿ
ಮತ್ತೆರಡು ಕಾಲೇಜು ಹುಡುಗರು ನಿಂತಿದ್ದರು .
ಒಂದು ಆತ್ಮಹತ್ಯೆ ವಿಷಯವಾಗಿ ಮಂಜಿನಕೊಪ್ಪ ಪೋಲಿಸ್ ಸ್ಟೇಷನ್ ನಲ್ಲಿ ಆ ಹುಡುಗರ ಸ್ಟೇಟ್ ಮೆಂಟ್ ಗಳು ರೆಕಾರ್ಡ್ ಆಗ್ತಾ ಇತ್ತು. ಸ್ಟೇಷನ್ ಇನ್ಸ್ ಪೆಕ್ಟರ್ ಗಿರೀಶ್ ಸೋಮನಹಳ್ಳಿ ಹಿಂದಿನ ದಿವಸ ಘಾಟಿ ರಸ್ತೆಯಲ್ಲಿ ರಾಗಿ ಕಲ್ಲು ಅನ್ನೊ ಸ್ಪಾಟ್ ಹತ್ರ ಮೇಲಿಂದ ಕೆಳಗೆ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಸಂತ್ ಅನ್ನೊ ಹುಡುಗನ ಆತ್ಮಹತ್ಯೆಯ ಬಗ್ಗೆ ಇನ್ವೆಸ್ಟಿಗೇಷನ್ ಮಾಡ್ತಾ ಇದ್ರು.
“ಅವನು ಸಾಯೋಕ್ ಮುಂಚೆ ಆ ಹುಡುಗಿಗೋಸ್ಕರ ಸಾಯ್ತಾಇದಿನಿ ಅಂತ ಕ್ಲಿಯರ್ ಆಗಿ ಹೇಳ್ಬಿಟ್ಟು ಸತ್ತಿದಾನೆ, ನೀವು ನೋಡಿದ್ರೆ ಏನು ಇಲ್ಲಾ ಅಂತ ಹೇಳ್ತಾ ಇದಿರ,… ನಿಜ ಹೇಳಿ ಏನು ಅಂತ” ಇನ್ಸ್ ಪೆಕ್ಟರ್ ಗಿರೀಶ್ ಆ ಹುಡುಗರನ್ನ ಮತ್ತೆ ಪ್ರಶ್ನೆ ಮಾಡ್ತ ಪಕ್ಕದ ಟೇಬಲ್ ಮೇಲೆ ಪ್ಲಾಸ್ಟಿಕ್ ಕವರ್ ನಲ್ಲಿದ್ದ ಒಂದು ಹ್ಯಾಂಡಿಕ್ಯಾಮ್ ನ ಕೈಗೆತ್ತಿಕೊಂಡ್ರು.
“ನಿಜವಾಗಲೂ
ಹೇಳ್ತಾ ಇದಿನಿ ಸರ್, ನೀವು
ಹೇಳ್ತಾ ಇರೊ ಆ ಹುಡುಗಿ
ವಸಂತ್ ನನ್ನ ಪ್ರೀತಿ ಮಾಡ್ತಾ
ಇದ್ಲು ಅನ್ನೋದು ಅವನ ಕಲ್ಪನೆಯಾಗಿತ್ತು
ಅಷ್ಟೆ, ಅವನು ಅವಳ ವಿಷಯದಲ್ಲಿ
ತುಂಬಾನೆ ಹುಚ್ಚುಚ್ಚಾಗಿ ಆಡ್ತಾ ಇದ್ದ ಸರ್,
ಯಾವಗ್ಲೊ ಒಂದು ಸರ್ತಿ ಅವಳು
ಕಾಲೇಜ್ ನಲ್ಲಿ ಸ್ಮೈಲ್ ಕೊಟ್ಟಿದ್ದು,
ಇನ್ಯಾವತ್ತೊ ಬಸ್ ನಲ್ಲಿ ಇವನು
ಸೀಟ್ ಬಿಟ್ಟು ಕೊಟ್ಟಿದಕ್ಕೆ ಅವಳು
ಥಾಂಕ್ಸ್ ಹೇಳಿದ್ದು, ಈ ಥರದ್ದು ಬಿಟ್ರೆ
ಅವಳಿಗೆ ಇವನು ಯಾರು ಅಂತಾನೆ
ಗೊತ್ತಿರ್ಲಿಲ್ಲ ಸರ್, ಪ್ರತಿ ದಿವಸ
ಕಾಲೇಜ್ ನಲ್ಲಿ ಅವಳನ್ನ ನೋಡಿಕೊಂಡು
ಅವಳ ಪ್ರತಿಯೊಂದು ಹಾವಭಾವಕ್ಕೂ ಇವನೆ ಏನೇನೊ ಕಲ್ಪಿಸಿಕೊಂಡು,
ಅವಳು ಅವನನ್ನ ಪ್ರೀತಿಸ್ತಾ ಇದಾಳೆ
ಅಂತ ಅಂದು ಕೊಂಡಿದ್ದ ಸರ್,
ಅವನ ಎದೆ ಮೇಲೆ ಅವಳ
ಹೆಸರು ಬೇರೆ ಹಚ್ಚೆ ಹಾಕಿಸಿಕೊಂಡಿದ್ದ,
ರಕ್ತದಲ್ಲಿ ಕಾಗದ ಬರೆಯೋದು ಇನ್ನೊಂದು
ಮತ್ತೊಂದು ಅಂತ ಏನೆನೊ ಮಾಡ್ತಾ
ಇದ್ದ. ನಾವೆ ಎಷ್ಟೊಸಲ ಇದೆಲ್ಲ
ಬೇಡ ಕಣೊ ಅಂತ ಹೇಳಿದ್ವಿ,
ನಮ್ ಮಾತೆ ಕೇಳ್ತಿರ್ಲಿಲ್ಲ ಸರ್” ಅಂತ
ಮಾತು ಮುಗಿಸಿ ಆ ಹುಡುಗ
ಇನ್ಸ್ ಪೆಕ್ಟರ್ ಮುಖ ನೋಡ್ತಾ
ನಿಂತ.
ಆತ್ಮಹತ್ಯೆ
ಮಾಡಿಕೊಂಡಿದ್ದ ಹುಡುಗ ವಸಂತ್ ನ
ತಂದೆ ಪರಮೇಶ್ವರಮೂರ್ತಿಗಳು, ಅಲ್ಲೆ ಪಕ್ಕದಲ್ಲಿ ನಿಂತು
ಆ ಹುಡುಗರ ಮಾತನ್ನ
ಕೇಳಿಸಿಕೊಳ್ತಾ ಇದ್ರು, ಸತ್ತ ಮಗನನ್ನ
ನೆನೆಸಿಕೊಂಡು ಅತ್ತು ಅತ್ತು ಕಣ್ಣುಗಳು
ಊದಿಕೊಂಡು ಕೆಂಪಾಗಿದ್ದುವು.
“ಸರ್, ಈ ಹುಡುಗರ
ಮಾತು ಕೇಳಿದ್ರಲ್ವ ನೀವು ಏನು ಹೇಳ್ತೀರ?”
ಅಂತ ಗಿರೀಶ್ ಪರಮೇಶ್ವರ ಮೂರ್ತಿಗಳನ್ನ
ಕೇಳಿದ್ರು
ನಿಟ್ಟುಸಿರು
ಬಿಟ್ಟ ಮೂರ್ತಿಗಳು “ಏನು ಹೇಳೊದು ಸರ್,
ಇವರ್ ಮಾತು ಸತ್ಯ ಹೌದೊ
ಅಲ್ವೊ ಅಂತ ಹೇಗೆ ಹೇಳಲಿ,
ನಿಮ್ಮೆಲ್ಲರ ಕಣ್ಣಿಗೆ ನನ್ನ ಮಗ
ಸತ್ತಿದ್ದು ನೆನ್ನೆ, ಆದರೆ ಅವನು
ನಮ್ಮ ಕೈ ತಪ್ಪಿ 2 ವರ್ಷ
ಆಗಿತ್ತು ಸರ್”
ಅಲ್ಲಿದ್ದವರಿಗೆ
ಅವರ ಮಾತುಗಳು ಅರ್ಥವಾಗಲಿಲ್ಲ, ಅಷ್ಟು
ಹೊತ್ತಿಗೆ ಒಬ್ಬ ಪೋಲಿಸ್ ಕಾನ್
ಸ್ಟೇಬಲ್ ಬಂದು
“ಸರ್, ಆ ಸುಸೈಡ್ ಸ್ಪಾಟ್
ನಲ್ಲಿ ಒಂದು ಶೂ ಸಿಕ್ಕಿದೆ”
ಅಂತ, ಒಂದು ಪ್ಲಾಸ್ಟಿಕ್ ಕವರ್
ನ ಇನ್ಸ್ ಪೆಕ್ಟರ್
ಗೆ ಕೊಟ್ಟ
“ಹೆಣ ಇನ್ನೂ ಸಿಕ್ಕಿಲ್ವ?” ಅನ್ನೊ
ಗಿರೀಶ್ ಪ್ರಶ್ನೆಗೆ
“ ಇಲ್ಲ
ಸರ್, ಆ ಸ್ಪಾಟ್ ತುಂಬಾನೆ
ಡೇಂಜರಸ್, ಕೆಳಗಡೆ ಆಳ ನೋಡಿದ್ರೆ
ಎಂಥವನಿಗೂ ಎದೆ ಝಲ್ ಅನ್ನುತ್ತೆ,
ಆದ್ರು ಹಗ್ಗ ಕಟ್ಟಿ ಸ್ವಲ್ಪ
ದೂರ ಇಳಿಯೋಕೆ ನೋಡಿದ್ವಿ ಈ
ಶೂ ಬಿಟ್ರೆ ಮತ್ತೇನು ಸಿಕ್ಕಿಲ್ಲ,
ನಂಗೆ ಅನಿಸೋ ಪ್ರಕಾರ ಆ
ಹೆಣ ಇನ್ನೂ ಕೆಳಗಡೆ ಬಿದ್ದು
ಬಿಟ್ಟಿದೆ” ಅಂದ
“ಕೆಳಗಡೆ
ಅಂದ್ರೆ, ಕೆಳಗಡೆ ಫಾರೆಸ್ಟ್ ಗ?
ಅಂತ ಗಿರೀಶ್ ಮತ್ತೆ ಪ್ರಶ್ನೆ
ಮಾಡಿದ.
“ಹೌದು ಸರ್ ಕೆಳಗಡೆ ಆ
ಫಾರೆಸ್ಟ್ ನಲ್ಲಿ ದೇವತೀರ್ಥ ಅಂತ
ಒಂದು ಚಿಕ್ಕ ನದಿ ಹರಿಯುತ್ತೆ,
ಹಿಂದೆ 2 ಸುಸೈಡ್ ಕೇಸ್ ನಲ್ಲಿ
ಹೆಣ ಸಿಕ್ಕಿದ್ದು ಅಲ್ಲೆ, ರಿಸರ್ವ್ಡ್ ಫಾರೆಸ್ಟ್
ಬೇರೆ ಆಗಿರೋದ್ರಿಂದ ಒಳಗಡೆ ಹೋಗೊದಿಕ್ಕೆ ಪರ್ಮಿಷನ್
ಬೇಕಾಗುತ್ತೆ ಸರ್, ಅದೂ ಅಲ್ಲದೆ
ನಾವು ಯಾವುದಕ್ಕೂ ತಡ ಮಾಡೊ ಹಾಗಿಲ್ಲ
ಲೇಟಾದ್ರೆ ಆ ಹೆಣನ ಕಾಡು
ಪ್ರಾಣಿಗಳು ತಿಂದುಕೊಂಡು ಹೋದ್ರೆ ಅದೂ ಇಲ್ಲಾ
ಅಂತ ಆಗ್ಬಿಡುತ್ತೆ ಸರ್, ಸಿಕ್ಕಾಪಟ್ಟ ಮಳೆ
ಬೇರೆ” ಅಂತ ಪರಿಸ್ಥಿತಿಯನ್ನ ವಿವರಿಸುತ್ತ
ಮುಂದಿನ ಆರ್ಡರ್ ಗೆ ಕಾಯ್ತಾ
ನಿಂತ.
“ಸರಿ ಆ ರೇಂಜ್ ಆಫಿಸರ್
ಮಹದೇವಪ್ಪನಿಗೆ ಫೊನ್ ಮಾಡಿ ವಿಷ್ಯ
ತಿಳ್ಸಿ ಒಂದು ಅರ್ಧಗಂಟೆಲಿ ಹೊರಡೋಣ”
ಅಂತ ಅವನನ್ನ ಕಳುಹಿಸಿದ, ಮತ್ತೆ
ಮೂರ್ತಿಗಳತ್ತ ತಿರುಗಿ
“ಇದು ನಿಮ್ಮ ಮಗಂದೇನ ಸರ್”
ಅಂತ ಪ್ಲಾಸ್ಟಿಕ್ ಕವರ್ ನಿಂದ ಶೂ
ನ ಹೊರಗಡೆ ತೆಗೆದ.
ಶೂ ನೋಡಿದ ಮೂರ್ತಿಗಳಿಗೆ
“ಹೌದು ಸರ್” ಅಂತ ಹೇಳುವ
ಹೊತ್ತಿಗೆ ದುಃಖ ಒತ್ತರಿಸಿಕೊಂಡು ಬಂತು,
ಮುಖಕ್ಕೆ ಕೈ ಹಿಡಿದುಕೊಂಡು ಅಳುವನ್ನ
ತಡೆಯೊ ಪ್ರಯತ್ನವನ್ನ ಮಾಡಿದ್ರು.
“ಒಂದು ಅರ್ಧಗಂಟೆನಲ್ಲಿ ನಾವು ಸ್ಪಾಟ್ ಹತ್ರ
ಹೊರಡ್ತಾ ಇದಿವಿ, ನಿಮ್ಮ ಮಗನ
ಬಗ್ಗೆ ಏನೊ ಹೇಳ್ತಾ ಇದ್ರಿ,
ಅದನ್ನ ಕಂಪ್ಲೀಟ್ ಮಾಡಬಹುದ ಸರ್?” ದುಃಖದಲ್ಲಿರೊ
ಅವರನ್ನ ಕೆಣಕೋ ಇಷ್ಟ ಇಲ್ಲದೇ
ಇದ್ದರೂ ತನಿಖೆಗೋಸ್ಕರವಾದರೂ ಇನ್ಸ್ಪೆಕ್ಟರ್ ಗೆ ಅದನ್ನ ಕೇಳಲೇ
ಬೇಕಿತ್ತು.
“ ಈ ಶೂ ನೊಡಿದ್ರಲ್ವ ಸರ್….
ಇದಿಕ್ಕೆ ಮೂರು ಸಾವಿರ ರುಪಾಯಿ”
ಮತ್ತೆ ಎಲ್ಲರ ಮುಖದಲ್ಲೂ ಹಳೆ
ಪ್ರಶ್ಣಾರ್ಥಕ ಚಿಹ್ನೆ, ಮೂರ್ತಿಗಳು ಮತ್ತೆ
ಮುಂದುವರೆಸಿಕೊಂಡು
“ನಂಗೆ
2 ಜನ ಮಕ್ಕಳು, ದೊಡ್ಡವನು ವಸಂತ,
ಚಿಕ್ಕವನು ಅರವಿಂದ. ವಸಂತ SSLC ಎಕ್ಸಾಮ್
ನಲ್ಲಿ ಅವನ ಶಾಲೆಗೆ ಸೆಕೆಂಡ್
ಪ್ಲೇಸ್ ಬಂದಿದ್ದ, ಅಲ್ಲಿ ತನಕ ಎಲ್ಲವು
ಸರಿಯಾಗಿತ್ತು. ಆದರೆ ಅವ್ನು ಕಾಲೇಜು
ಸೇರಿ ಎರಡು ತಿಂಗಳಲ್ಲಿ, ಸಂಪೂರ್ಣವಾಗಿ
ಬದಾಲಾಗಿ ಬಿಟ್ಟಿದ್ದ. ಓದೋದಕ್ಕಿಂತ ಹೆಚ್ಚಾಗಿ ಶೋಕಿ ಮಾಡೊದಿಕ್ಕೆ ಅಂತಾನೆ
ಕಾಲೇಜಿಗೆ ಹೋಗೊ ರೀತಿನಲ್ಲಿ ಹೋಗ್ತಿದ್ದ,
ಅವನಿಗೆ ಎಲ್ಲಾವೂ ಬ್ರಾಂಡೆ ಡ್
ಬೇಕಾಗಿತ್ತು ಸರ್, ಬ್ರಾಂಡೆಡ್ ಶರ್ಟ್,
ಪ್ಯಾಂಟ್, ಬ್ರಾಂಡೆಡ್ ಶೂ, ತಿಂಗಳಿಗೊಂದು ಮೊಬೈಲ್
ಹ್ಯಾಂಡ್ ಸೆಟ್, ಅದಕ್ಕೆ ಕರೆನ್ಸಿ.
ಕರೆನ್ಸಿ ಅಂತು ಹಾಕಿಸಿ, ಹಾಕಿಸಿ,
ಒಂದೊಂದು ಸರ್ತಿ ತಿಂಗಳಕೊನೆಗೆ ನನ್ನ
ಕೈ ಪೂರ್ತಿ ಖಾಲಿ ಆಗ್ತಾ
ಇತ್ತು. ಎಷ್ಟು ಹೇಳಿದ್ರು ಮಾತೆ
ಕೇಳ್ತಿರ್ಲಿಲ್ಲ ಸರ್, ಓದೊದ್ರಲ್ಲೂ ಹಿಂದೆ
ಬಿದ್ದಿದ್ದ, ತುಂಬಾನೆ ಹಠಮಾರಿಯಾಗಿದ್ದ, ಸಿಕ್ಕಿದಕ್ಕೆಲ್ಲ
ಸಿಟ್ಟು ಮಾಡಿಕೊಳ್ಳೊದು, ಅವನ ಅಮ್ಮನ ವಿಷಯಕ್ಕೆ
ಕೈ ಎತ್ತೊವರೆಗು ಹೋಗಿದ್ದ, ಆದರೂ ನಮ್ಮ ಮಗಾ
ಅಂತ ಸುಮ್ಮನಿದ್ವಿ, ಜವಾಬ್ದಾರಿ ಬರುತ್ತೆ ಅಂತ ಕಾದ್ವಿ
ಎಷ್ಟೊ ಸರ್ತಿ ನನ್ನ ಚಿಕ್ಕ
ಮಗನ ಆಸೆ ಬಲಿಕೊಟ್ಟು ಇವನಿಗೆ
ಖರ್ಚು ಮಾಡ್ತಿದ್ದೆ, ಮಿಡಲ್ ಕ್ಲಾಸ ಫ್ಯಾಮಿಲಿ
ಸರ್ ನಮ್ದು ಏನ್ ಮಾಡ್ತೀರ,
ಯಾವ ವಿಷಯಾನು ನಮ್ ಹತ್ರ
ಹೇಳ್ತಿರ್ಲಿಲ್ಲ, ಮನೆಗೆ ಬಂದ್ರೆ ಟಿ.ವಿ. ರೂಮ್ ನಲ್ಲಿ
ಕಂಪ್ಯೂಟರ್ ಅದು ಏನು ಮಾಡ್ತಿದ್ದನೋ
ಗೊತ್ತಾಗ್ತಿರ್ಲಿಲ್ಲ ಸರ್. ಹೀಗಿರೊವಾಗ ಆ
ಹುಡುಗಿ, ಪ್ರೀತಿ ಈ ಹುಚ್ಚಾಟಗಳೆಲ್ಲ
ಹೇಗ್ ಸರ್ ಗೊತ್ತಾಗ್ಬೇಕು?” ಅಂತ
ಮೂರ್ತಿಗಳು ಮತ್ತೆ ಅಳೊಕೆ ಶುರು
ಹಚ್ಚಿಕೊಂಡ್ರು ಈ ಸರ್ತಿ ಅವರ
ಅಳುವನ್ನ ಕಂಟ್ರೋಲ್ ಮಾಡೊದಿಕ್ಕೆ ಅವರಿಂದ ಸಾಧ್ಯವಾಗಲಿಲ್ಲ.
ಅವರ ಅಳು ಬಿಟ್ಟರೆ ಎಲ್ಲವೂ
ಮೌನವಾಗಿತ್ತು, ಆ ಮೌನವನ್ನ ಮುರಿಯಿವ
ಹಾಗೆ ಒಬ್ಬ ಕಾನ್ಸ್ ಸ್ಟೇಬಲ್
ಬಂದು,
“ಸರ್ ಆಲ್ ಮೋಸ್ಟ್ ಎಲ್ಲಾ
ರೆಡಿ ಇದೆ, ನೀವು ಯೆಸ್
ಅಂದ್ರೆ ಹೊರಡಬಹುದು ಸರ್” ಅಂದ, ಹೊರಡೊಣ
ಅನ್ನೊ ಕೈಸನ್ನೆ ಮಾಡಿದ ಇನ್ಸ್
ಪೆಕ್ಟರ್ ಮೂರ್ತಿಗಳ ಹತ್ತಿರ
“ಸಮಾಧಾನ
ಮಾಡ್ಕೊಳಿ ಸರ್, ನಾವು ಇನ್ನೇನು
ಸ್ಪಲ್ಪ ಹೊತ್ತಲ್ಲಿ ಹೊರಡ್ತೀವಿ, ಡೆಡ್ ಬಾಡಿ ಸಿಕ್ಕಿದ
ತಕ್ಷಣ ನಿಮಗೆ ವಿಷಯ ತಿಳಿಸ್ತೀವಿ,
ನೀವು ಈಗ ಮನೇಗ್ ಹೋಗಬಹುದು
ಧೈರ್ಯ ತೆಗೊಳಿ,” ಅಂತ ಗಿರೀಶ್ ಮುಂದಿನ
ಕೆಲಸಕ್ಕೆ ಸಿದ್ದವಾದರು. ಕಣ್ಣು ಒರೆಸಿಕೊಂಡು ಒಂದು
ಸಣ್ಣ ನಮಸ್ಕಾರ ಮಾಡಿ ಮೂರ್ತಿಗಳು
ಅಲ್ಲಿಂದ ಹೊರ ಬಿದ್ದರು, ಅಲ್ಲಿದ
ಕಾಲೇಜು ಹುಡುಗರು ಅವರ ಸ್ಟೇಟ್
ಮೆಂಟ್ ಗೆ ಸಹಿಹಾಕಿ ಅವರು
ಕೂಡ ಮನೆ ದಾರಿ ಹಿಡಿದ್ರು.
ಅಷ್ಟಕ್ಕು
ಹಿಂದಿನ ದಿವಸ ಏನಾಗಿತ್ತು, ವಸಂತ
ಆತ್ಮಹತ್ಯೆ ಮಾಡಿಕೊಂಡೊದ್ದ ಯಾಕೆ?
ಬನ್ನಿ ನೋಡೋಣ….
ಎರಡು ದಿವಸದಿಂದ ಮಳೆ ಕಮ್ಮಿ ಇದೆ
ಅಂತ ಪರಮೇಶ್ವರ ಮೂರ್ತಿಗಳು ಮಲ್ಲಿಕಟ್ಟೆಯಲ್ಲಿರೊ ಅವರ ಕುಲದೇವರ ದರ್ಶನಕ್ಕೆ
ಹೊರಟಿದ್ರು, ಮಂಜಿನಕೊಪ್ಪದಿಂದ ಮೂರು ನಾಲ್ಕು ಗಂಟೆ
ಪ್ರಯಾಣ ಹಾಗಾಗಿ, ಕೆಲಸಕ್ಕೆ ಇಡಿ
ದಿವಸ ರಜಹಾಕಿ ಟಾಕ್ಸಿನಲ್ಲಿ ಹೋಗಿಬರೊ
ಸಿದ್ದತೆ ಮಾಡಿಕೊಂಡಿದ್ರು. ಆದ್ರೆ ರಾತ್ರಿಯಿಂದ ನಿಂತಿದ್ದ
ಮಳೆ ಮತ್ತೆ ಶುರುವಾಗಿತ್ತು, ಇಷ್ಟೆಲ್ಲ
ಸಿದ್ದತೆ ಮಾಡಿಕೊಂಡು ನಿಲ್ಲಿಸೋದು ಬೇಡ, ಹೋಗ್ಬಿಟ್ಟು ಬರೋದೆ
ಅಂತ ನಿರ್ಧರಿಸಿಕೊಂಡು ಹೊರಡುತ್ತಾ ಇದ್ರು. ಚಿಕ್ಕಮಗ ಆಗಲೆ
ಶಾಲೆಗೆ ಹೋಗಿದ್ದ, ವಸಂತ ಇನ್ನೂ ಮನೇಲಿದ್ದ,
ಎಲ್ಲರಿಗಿಂತ ಮುಂಚೆ ಕಾಲೇಜಿಗೆ ಹೋಗೊನು,
ಆದ್ರೆ ಇವತ್ತು ಮಾತ್ರ ಬೆಳಗ್ಗೆ
ಇಂದ ಅವನ ರೂಮ್ ನಿಂದ
ಹೊರಗೆ ಬಂದೇ ಇರ್ಲಿಲ್ಲ. ಇದನ್ನೆ
ಯೋಚನೆ ಮಾಡ್ತ ಇದ್ದ ಮೂರ್ತಿಗಳು
ಸ್ವಲ್ಪ ಸಮಯ ಇದೆ ಅಂತ
ಟಿ.ವಿ ಆನ್ ಮಾಡಿದ್ರು,
ಮಾಮೂಲಿ ಮಳೆ ನ್ಯೂಸ್, ಅದರೆ
ಜೊತೆಗೆ ಮತ್ತೊಂದು ಸುದ್ದಿ, ಹಿಂದಿನ ದಿನ
ಗಿರಿಸಾಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಎದುರು ಒಂದಷ್ಟು ಜನ
ಸೇರಿಕೊಂಡು ದೊಂಬಿ ಎಬ್ಬಿಸಿ, ಕಿಟಕಿ
ಗಾಜು ಪುಡಿಮಾಡಿ, ಡಾಕ್ಟರ್ ಗಳನ್ನ ಹೊರಗೆಳೆದು
ರಾದ್ದಾಂತ ಆಗಿತ್ತು. ಗಿರಿಸಾಗರದ ಒಂದು ಕಾಲೇಜು ಹುಡುಗಿಯನ್ನ
ಜ್ವರ ಅಂತ ಆಸ್ಪತ್ರೆಗೆ ಸೇರಿಸಿದ್ರು,
ಆದರೆ ತಪ್ಪಾದ ಟ್ರೀಟ್ ಮೆಂಟ್
ನಿಂದ ನೆನ್ನೆ ಮಧ್ಯಾಹ್ನ ಅವಳು
ಸತ್ತು ಹೋಗಿದ್ಲು. ಈ ವಿಷಯವಾಗೆ ಆಸ್ಪತ್ರೆಯಲ್ಲಿ
ದೊಡ್ಡ ಗಲಾಟೆನೆ ನಡೆದಿತ್ತು. ಹಾಗಾಗಿ
ಇವತ್ತು ಗಿರಸಾಗರದ ಕಾಲೇಜಿಗೆ ಶೋಕಾರ್ಥವಾಗಿ ರಜೆ ಸಾರಿದ್ರು. ನ್ಯೂಸ್
ನೋಡಿದ ಮೂರ್ತಿಗಳಿಗೆ ಈಗ ಕಾರಣ ಗೊತ್ತಾಯ್ತು,
ರಜ ಅಂತ ಅವನು ಕಾಲೇಜಿಗೆ
ಹೋಗಿಲ್ಲ ಅಂದು ಕೊಂಡ್ರು.
ಆದ್ರೆ ಅವನ ರೂಂ ನ
ಒಳಗಿನ ಸತ್ಯಾನೆ ಬೇರೆ,
ವಸಂತ್ ರಾತ್ರಿಯೆಲ್ಲ ನಿದ್ದೇನೆ
ಮಾಡಿರ್ಲಿಲ್ಲ, ಕಣ್ಣುಗಳು ಸೊರಗಿ ಹೋಗಿದ್ವು, ಹಿಂದಿನ
ದಿವಸ ಆಸ್ಪತ್ರೆಯಲ್ಲಿ ತಪ್ಪು ಟ್ರೀಟ್ ಮೆಂಟ್
ನಿಂದ ಸತ್ತು ಹೋಗಿದ್ದ ಆ
ಹುಡುಗಿಯ ಫೊಟೊವನ್ನ ಕೈಯಲ್ಲಿ ಹಿಡಿದುಕೊಂಡು ರಾತ್ರಿಯೆಲ್ಲ
ಹುಚ್ಚನ ರೀತಿ ಅತ್ತಿದ್ದ. ಸಿಗರೇಟ್
ಅಭ್ಯಾಸ ಇದ್ದರೂ, ಅಲ್ಲಿಯ ತನಕ
ಅದು ಮನೆಯ ಬಾಗಿಲು ದಾಟಿರಲಿಲ್ಲ
ಆದರೆ ಅವತ್ತು ಒಂದೇ ರಾತ್ರಿ
3 ಪ್ಯಾಕೇಟ್ ಸಿಗರೇಟ್ ಖಾಲಿ ಮಾಡಿದ್ದ,
ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ
ಆ ಹುಡುಗಿಯ ಹೆಸರನ್ನ
ತಾನೆ ಸಿಗರೇಟ್ ನಲ್ಲಿ ಸುಟ್ಟು
ಕೊಂಡಿದ್ದ.
ಹೊರಡೋ ಹೊತ್ತಿಗೆ ಮೂರ್ತಿಗಳು ಅವನನ್ನ ಕರೆದ್ರು, ನಿದ್ದೆಯಿಂದ
ಎದ್ದು ಬಂದವನಂತೆ ಹೊರಗಡೆ ಬಂದು ನಿಂತ.
“ಮನೆ ಬಾಗಿಲು ಹಾಕೊ, ಮಲ್ಲಿಕಟ್ಟೆ
ದೇವಸ್ಥಾನಕ್ಕೆ ಹೋಗಿ ಬರ್ತೀವಿ, ನಾನು
ಹೋದ ಮೇಲೆ ಮತ್ತೆ ಮಲಗಬೇಡ
ಏನಾದ್ರು ಉಪಯೋಗಕ್ಕೆ ಬರೊ ಕೆಲಸ ಇದ್ರೆ
ಮಾಡು” ಅಂತ ಮೂರ್ತಿಗಳು ಗಡುಸಾಗಿ
ಅವನಿಗೆ ಹೇಳಿ ಹೊರಡೋಕೆ ಸಿದ್ದವಾದ್ರು.
“ಅಪ್ಪ…….”
ಎಷ್ಟೊ ವರ್ಷಗಳ ನಂತರ ಸೌಮ್ಯವಾಗಿ
ವಸಂತ ಅಪ್ಪಾ ಅಂತ ಕರೆದಿದ್ದು
ಕೇಳಿ, ಮೂರ್ತಿಗಳು ಒಂದು ಕ್ಷಣ ಆಶ್ಚರ್ಯದಿಂದ
ಅಲ್ಲೆ ನಿಂತು ಬಿಟ್ಟರು. ಮುಂದೆ
ಮುಂದೆ ಹೊರಟಿದ್ದ ವಸಂತನ ಅಮ್ಮಾನು ತಿರುಗಿ
ನಿಂತ್ರು.
“ಅಪ್ಪಾ,
ನಾನು ಕೂಡ ದೇವಸ್ಥಾನಕ್ಕೆ ಬರ
ಬಹುದ? ಯಾಕೊ ನಾನು ಇವತ್ತು
ಒಂಟಿ ಅಂತ ಅನ್ನಿಸ್ತಿದೆ”
ವಸಂತನ ಮಾತು ಕೇಳಿ ಅವನ
ಅಪ್ಪ ಅಮ್ಮನಿಗೆ ಮಾತೆ ಹೊರಡಲಿಲ್ಲ, 2 ವರ್ಷದ
ಹಿಂದೆ ಕಳೆದು ಹೋದ ನಮ್ಮ
ಮಗ ಮತ್ತೆ ಸಿಕ್ಕಿದ ಅನ್ನೊ
ಖುಷಿಯಾಯ್ತು. ಬೇಗ ಬೇಗ ಸ್ನಾನ
ಮಾಡಿ ಅವರ ಜೊತೆ ಅವನೂ
ಹೊರಟ. ಮಗ ಸರಿ ಹೋದ
ಅನ್ನೊ ಖುಷಿಯಿಂದ ಅಪ್ಪ, ಅಮ್ಮ ನೆಮ್ಮದಿಯಾಗಿ
ಕುಲದೇವರ ದರ್ಶನ ಮುಗಿಸಿಕೊಂಡರು.
ಹಿಂದಿರುಗೋ
ದಾರಿ ಘಾಟಿ ರಸ್ತೆ, ಅಲ್ಲಿ
ರಾಗಿ ಕಲ್ಲು ಅನ್ನೊ ಸ್ಪಾಟ್
ಇದೆ. ಅಲ್ಲಿ ನಿಂತು ಫೊಟೊ
ತೆಗೆಯೋದೆ ಒಂದು ಮಜ, ಹಾಗಂತ
ಸ್ವಲ್ಪ ಎಚ್ಚರ ತಪ್ಪಿದ್ರು ಅಷ್ಟೆ
ಅಪಾಯಕಾರಿ, ಅಲ್ಲಿಗೆ ಇವರು ಬರೋಹೊತ್ತಿಗೆ
ಸಂಜೆ ಆಗಿತ್ತು ಮಳೆ ಶುರುವಾಗಿ
ಚಳಿಹಿಡಿಸಿ ಬಿಟ್ಟಿತ್ತು. ಮುಂದೆ ದಾರಿ ಕಾಣದಷ್ಟು
ದಟ್ಟವಾಗಿ ಮಂಜು ತುಂಬಿಕೊಂಡಿತ್ತು.
ಕೈಯಲ್ಲಿ
ಹ್ಯಾಂಡಿ ಕ್ಯಾಮ್ ಹಿಡಿದ ವಸಂತ್
“ಅಪ್ಪ ಒಂದು ಐದು ನಿಮಿಷ
ನಿಲ್ಲಿಸಿ, ಇಲ್ಲೆ ಸ್ವಲ್ಪ ವಿಡಿಯೋ
ತೆಗೆದು ಬರ್ತೀನಿ” ಮೂರ್ತಿಗಳು ಹಿಂದೆ ಮುಂದೆ ಯೋಚನೆ
ಮಾಡದೆ ಟಾಕ್ಸಿ ನಿಲ್ಲಿಸಿದ್ರು, ಮಗನ
ಜೊತೆ ಇಳಿಯೋದಿಕ್ಕೆ ತಯಾರಾದ್ರು.
“ತುಂಬಾ
ಚಳಿ ಅಪ್ಪ, ಮಳೆ ಬೇರೆ
ಬರ್ತಾ ಇದೆ ನೀವು ಇಲ್ಲೆ
ಇರಿ, ಐದೇ ನಿಮಿಷ” ಅಂತ
ಅಂದಾಗ ಮೂರ್ತಿಗಳು ಏನು ಹೇಳದೆ ತಲೆ
ಅಲ್ಲಾಡಿಸಿ ವಾಪಾಸ್ ಕಾರಿನ ಬಾಗಿಲು
ಹಾಕಿಕೊಂಡ್ರು, ಮಗ ಹಿಂದಿನಂತಾದ ಅನ್ನೊ
ಖುಷಿಗೆ ಅವರು ಯಾವುದಕ್ಕೂ ಸಿದ್ದವಾಗಿದ್ರು.
ಕಾರಿಂದ
ದೂರಕ್ಕೆ ಅವರಿಗೆ ಕಾಣದೇ ಇರೊ
ಜಾಗಕ್ಕೆ ಬಂದ ವಸಂತ್, ಮತ್ತೆ
ಜೋರಾಗಿ ಅಳೋದಕ್ಕೆ ಶುರು ಮಾಡಿದ, ಪರ್ಸ್
ನಿಂದ ಆ ಹುಡುಗಿ ಪೋಟೊ
ಹೊರಗಡೆ ತೆಗೆದು ಸ್ವಲ್ಪ ಹೊತ್ತು
ನೋಡುತ್ತಾ ನಿಂತ, ಕೈಯಲ್ಲಿದ್ದ ಹ್ಯಾಂಡಿ
ಕ್ಯಾಮ್ ನ ಓನ್ ಮಾಡಿ
ತನ್ನ ಮುಖದ ಮುಂದೆ ಹಿಡಿದು
ಅವನ ಮಾತು ಗಳ ವೀಡಿಯೋ
ರೆಕಾರ್ಡಿಂಗ್ ಶುರು ಮಾಡಿದ
“ ಅಪ್ಪ,
ಅಮ್ಮ, ಅರವಿಂದು, ಸಾರಿ…. ಅವಳು ನನ್ನನ್ನ
ಒಂಟಿ ಮಾಡ್ಬಿಟ್ಟು ಹೋದ್ಲು, ಅವಳನ್ನ ಬಿಟ್ಟು
ಬದುಕೋ ಶಕ್ತಿ ನನಗೆ ಇಲ್ಲ,
ಅವಳ ಜೊತೆ ನಾನು ಹೋಗೊ
ನಿರ್ಧಾರ ಮಾಡ್ಬಿಟ್ಟಿದೀನಿ, ನನ್ನ ಪ್ರೀತಿ ಅಮರ”
ಅಂತ ಹೇಳಿ ಅವಳ ಫೊಟೊವನ್ನೂ
ಹ್ಯಾಂಡಿಕ್ಯಾಮ್ ಅನ್ನು ಪಕ್ಕದ ಕಲ್ಲಿನ
ದಂಡೆಯ ಮೇಲಿಟ್ಟು ಕಣ್ಣು ಮುಚ್ಚಿ ಅಲ್ಲಿಂದ
ಜಿಗಿದ……….
ಎಷ್ಟು ಹೊತ್ತಾದರೂ ಮಗ ಬರದೇ ಇರೊದನ್ನ ನೋಡಿ ಮೂರ್ತಿಗಳು ಕಾರಿಂದ ಇಳಿದು ಹೊರಗಡೆ ಬಂದ್ರು, ಸುತ್ತಾ ಮುತ್ತಾ ಎಲ್ಲೂ ಕಾಣಿಸ್ಲಿಲ್ಲ, ಹಾಗೆ ಸ್ವಲ್ಪ ದೂರ ಮುಂದೆ ಬಂದವರಿಗೆ ಕಲ್ಲಿನ ದಂಡೆಯ ಮೇಲಿದ್ದ ಹ್ಯಾಂಡಿ ಕ್ಯಾಮ್, ಫೋಟೋ ಕಾಣಿಸ್ತು. ಅವುಗಳನ್ನ ನೋಡ್ತಾ ಇದ್ದ ಹಾಗೆ ಅವರ ಎದೆಬಡಿತ ಜಾಸ್ತಿ ಆಯ್ತು, ಹತ್ತಿರ ಹೋಗಿ ನೋಡುವ ಭಯ, ಅವರಿದ್ದ ಆ ರಾಗಿಕಲ್ಲು ಎಂಥ ಜಾಗ. ಅಲ್ಲಿ ಏನು ಆಗಿರ ಬಹುದು ಅನ್ನುವ ಒಂದು ಊಹೆ ಇದ್ದರೂ, ಅದು ಸತ್ಯವಾಗಿದ್ದರೆ ಹೇಗೆ ಅಗರಗಿಸಿಕೊಳ್ಳೊದು ಅನ್ನುವ ಹಿಂಸೆ.
ಹಾಗಂತ ಸತ್ಯವನ್ನ ಎದುರಿಸದೇ ಇರೊಕಾಗುತ್ತ???
ಆ ಹ್ಯಾಂಡಿ ಕ್ಯಾಮ್ ವೀಡಿಯೊ, ಆ ಫೊಟೊ ಅವರಿಗೆ ಅಲ್ಲಿನ ಕಥೆಯನ್ನ ಬಿಚ್ಚಿ ಹೇಳ್ತಾ ಇತ್ತು. ಘಾಟಿಯ ಆ ಮಳೆ, ಚಳಿ ವಸಂತ ಎಲ್ಲವೂ ಸೇರಿ ಅವರ ಹೃದಯವನ್ನ ಹಿಂಡಿದಂತಾಯ್ತು, ನಿಂತ ಜಾಗವೇ ಕುಸಿದ ಹಾಗಯ್ತು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು, ದಟ್ಟವಾದ ಮಂಜಿನಿಂದ ತಕ್ಷಣದ ಯಾವ ಕಾರ್ಯವೂ ಅಲ್ಲಿ ಸಾಧ್ಯವಿರಲಿಲ್ಲ. ಅವತ್ತು ಸಂಜೆ ಮನೆಯವರು, ಮುಂದಿನ ದಿವಸ ಸ್ನೇಹಿತರೂ ಅಂತ ವಿಚಾರಣೆಗಳು ನಡೆದವು, ಎರಡನೇ ದಿವಸ ಮಧ್ಯಾಹ್ನ ಕಳೆದು ಹೋಗಿರೊ ವಸಂತ ನ ಶವ ಹುಡುಕುವ ಕೆಲಸವನ್ನ ಘಾಟಿ ಕೆಳಗಿನ ಕಾಡಿನಲ್ಲಿ ಪೋಲೀಸರು ಶುರು ಹಚ್ಚಿಕೊಂಡರು.
ಆ ಹ್ಯಾಂಡಿ ಕ್ಯಾಮ್ ವೀಡಿಯೊ, ಆ ಫೊಟೊ ಅವರಿಗೆ
ಅಲ್ಲಿನ ಕಥೆಯನ್ನ ಬಿಚ್ಚಿ ಹೇಳ್ತಾ ಇತ್ತು. ಘಾಟಿಯ ಆ ಮಳೆ, ಚಳಿ ವಸಂತ ಎಲ್ಲವೂ ಸೇರಿ ಅವರ ಹೃದಯವನ್ನ
ಹಿಂಡಿದಂತಾಯ್ತು, ನಿಂತ ಜಾಗವೇ ಕುಸಿದ ಹಾಗಯ್ತು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು,
ದಟ್ಟವಾದ ಮಂಜಿನಿಂದ ತಕ್ಷಣದ ಯಾವ ಕಾರ್ಯವೂ ಅಲ್ಲಿ ಸಾಧ್ಯವಿರಲಿಲ್ಲ. ಅವತ್ತು ಸಂಜೆ ಮನೆಯವರು, ಮುಂದಿನ
ದಿವಸ ಸ್ನೇಹಿತರೂ ಅಂತ ವಿಚಾರಣೆಗಳು ನಡೆದವು, ಎರಡನೇ ದಿವಸ ಮಧ್ಯಾಹ್ನ ಕಳೆದು ಹೋಗಿರೊ ವಸಂತ ನ ಶವ
ಹುಡುಕುವ ಕೆಲಸವನ್ನ ಘಾಟಿ ಕೆಳಗಿನ ಕಾಡಿನಲ್ಲಿ ಪೋಲೀಸರು ಶುರು ಹಚ್ಚಿಕೊಂಡರು.
ಎರಡು ದಿನಗಳ ನಂತರ ಕಾಡಲ್ಲಿ
ದೇವತೀರ್ಥ ನದಿಯ ಒಂದು ಬಂಡೆನಡುವೆ
ಒಂದು ಹೆಣ ಸಿಕ್ಕಿಹಾಕಿಕೊಂಡಿರುವುದು ಕಾಣಿಸ್ತು. ಮನೆಯವರು
ಹೇಳಿದ ಬಟ್ಟೆ ಗುರುತು, ಇನ್ನೊಂದು
ಕಾಲಿನಲ್ಲಿದ್ದ ಶೂ ವನ್ನ ಹೊರತುಪಡಿಸಿದ್ರೆ,
ಅದು ವಸಂತನ ಹೆಣ ಅಂತ
ಹೇಳೋದಕ್ಕೆ ಸಾಧ್ಯಾನೆ ಇರಲಿಲ್ಲ. ಹೆಣವನ್ನ ಮೇಲಕ್ಕೆತ್ತಿ ಕಾಡಿಂದ
ಹೊರಗಡೆ ತಂದು ಅಂಬ್ಯುಲೆನ್ಸ್ ನಲ್ಲಿ
ಹಾಕ್ಬಿಟ್ಟು ಕಳುಹಿಸಲಾಯಿತು. ಗಿರೀಶ್ ಸೋಮನ ಹಳ್ಳಿ
ಪರಮೇಶ್ವರ ಮೂರ್ತಿಗೆ ಫೊನ್ ಮಾಡಿ ವಿಷಯ
ತಿಳಿಸಿ ಅಲ್ಲಿಂದ ಹೊರಟರು.
ಜೀಪ್ ನಲ್ಲಿ ಕೂತಿದ್ದ ಗಿರೀಶ್
ಹ್ಯಾಂಡಿ ಕ್ಯಾಮ್ ನ ಕೊನೆಯ
ವಿಡಿಯೋವನ್ನ ಮತ್ತೆ ಪ್ಲೇ ಮಾಡಿ
ನೋಡಿದ್ರು, ವಸಂತನ ಕೊನೆಯ ಮಾತುಗಳ
ಜೊತೆಗೆ ಕಲ್ಲಿನ ದಂಡೆಯ ಮೇಲಿಟ್ಟಿದ್ದ
ಕ್ಯಾಮರಾದಲ್ಲಿ ಅವನು ಜಿಗಿಯುವ ದೃಶ್ಯವೂ
ರೆಕಾರ್ಡ್ ಆಗಿತ್ತು. ಪಕ್ಕದಲ್ಲಿ
ಕೂತು ವಿಡಿಯೊ ನೋಡ್ತಾ
ಇದ್ದ ಕಾನ್ಸ್ ಸ್ಟೇಬಲ್
“ಏನ್ ಅನ್ಯಾಯ ಸರ್, ಅವನನ್ನ
ಹೆತ್ತವರಿಗೆ ಬೆಲೆನೆ ಇಲ್ಲಾಂತ ಅಯ್ತಲ್ವ
ಸರ್????” ಅಂತ ಮಾತಿಗೆಳೆದ
“ಹೌದು,…
ದೊಡ್ಡ ಅನ್ಯಾಯ,…. ಇವನ ಸಾವಿಗೆ ಏನ್
ಅರ್ಥ ಇದೆ ಹೇಳಿ, ಸಾಯೊ
ವಯಸ್ಸ? ಸಾಯೊ ಕಾರಣಾನ ಅದು?
ಇವತ್ತಿನ ಹುಡುಗರಿಗೆ ಆತ್ಮಹತ್ಯೆ ಅನ್ನೋದು ಒಂಥರ ಫ್ಯಾಷನ್
ಆಗ್ಬಿಟ್ಟಿದ್ದೆ ಅನ್ಸುತ್ತೆ. ಅವಳಿಗೆ ಇವನು ಯಾರು
ಅಂತಾನೆ ಗೊತ್ತಿಲ್ವಂತೆ, ನಮ್ಮ ಪ್ರೀತಿ ಅಮರವಾಗ್ಲಿ ಅಂತ
ಇವನು ಸಾಯ್ತಾನಂತೆ, ಏನ್ ಮೂರ್ಖತನ ಇದು?....
ನಾವೆಲ್ಲ ಕಾಲೇಜು ಓದೊ ಹೊತ್ತಿಗೆ
ಜೀವನ ಅಂದರೆ ಏನು ಅಂತ
ಜೀವನದ ಪಾಠವನ್ನ ಜೊತೆಗೆ ಕಲಿತುಕೊಂಡು
ಬೆಳಿತಾ ಇದ್ವಿ. ಆದ್ರೆಇವತ್ತು, ಹುಡುಗರಿಗೆ
ಬೆಳೆಯೋದು ದೇಹ ಮಾತ್ರ, ಮಾನಸಿಕ
ವಾಗಿ, ನೈತಿಕವಾಗಿ ಅವರು ಬೆಳಿತಾನೆ ಇಲ್ಲ,
ಒಂದು ಚಿಕ್ಕ ಸಮಸ್ಯೆಗೂ ಸಾಯೋ
ನಿರ್ಧಾರ ಹುಡುಕೋ ಮನಸ್ಥಿತಿ ಅಂದ್ರೆ
ಏನ್ ಅದರ ಅರ್ಥ?….. ಹಾಗೆ
ನೋಡಿದ್ರೆ ನಾವೆಲ್ಲಾ ಯವತ್ತೊ ಆತ್ಮಹತ್ಯೆ ಮಾಡಿ
ಕೊಳ್ಬೇಕಿತ್ತು……ನನಿಗೆ ಅನ್ನಿಸೋ ಪ್ರಕಾರ
ನಮ್ಮಲ್ಲಿ ಬೆಳಿತಾ ಇರೊ ಸೂಕ್ಷ್ಮ
ಮನಸ್ಸುಗಳಿಗೆ ತಂದೆ ತಾಯಿತರ, ಸ್ನೇಹಿತರ
ಥರ ಮಾನಸಿಕವಾಗಿ ಸ್ಥೈರ್ಯ ತುಂಬೊ ಕೆಲಸಗಳಾಗ
ಬೇಕು, ಓದಿನ ಜೊತೆಗೆ ನಾಲ್ಕು
ಜನರ ನಡುವೆ ಬದುಕೊ ಧೈರ್ಯವನ್ನ
ತುಂಬ ಬೇಕು, ಹುಟ್ಟಿದ ಮನುಷ್ಯನಿಗೆ
ಬದುಕೋ ಹಕ್ಕು ಮಾತ್ರ ಇದೆ,
ಸಾಯೋ ಹಕ್ಕು ಇಲ್ಲಾ ಅನ್ನೊದು
ಅವರಿಗೆ ತಿಳಿಸಿ ಹೇಳುವವರು ಬೇಕು.
ಅಗಲಾದ್ರು ಇಂತಹ ಅವ್ಯವಸ್ಥೆಗಳನ್ನ ನಿಲ್ಲಿಸ
ಬಹುದೊ ಏನೊ”
ಅಂತ ಹೇಳೊ ಹೊತ್ತಿಗೆ ಅವರ
ಜೀಪು ರಾಗಿ ಕಲ್ಲನ್ನ ದಾಟಿತ್ತು.
ಮಂಜಿನ ಕೊಪ್ಪದ ಕಡೆ
ಸಾಗುತಿದ್ದ ಜೀಪು, ಘಾಟಿ ರಸ್ತೆಯ
ದಟ್ಟ ಮಂಜಿನ ನಡುವೆ ಮೆಲ್ಲಗೆ ಮರೆಯಾಯಿತು.
ನೀವೆ ಹೇಳಿ ವಸಂತನ ರೀತಿಯ
ಹದಿಹರೆಯದ ಮನಸ್ಸಿನ ಹುಚ್ಚು ನಿರ್ಧಾರಗಳಿಗೆ
ಏನನ್ನ ಬೇಕು????
ನಿಮಗೆ ಅನಿಸಿದ್ದನ್ನ ಕಾಮೆಂಟ್ ಮೂಲಕ ತಿಳಿಸ ಬಹುದು
I like this ,one side tragedi love story
ಪ್ರತ್ಯುತ್ತರಅಳಿಸಿThank You
ಅಳಿಸಿಚೆನ್ನಾಗಿದೆ.. ಇಂದಿನ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಬರಹ.. ಹೀಗೆ ಸಾಗಲಿ ಸಾಹಿತ್ಯದ ತೇರು
ಪ್ರತ್ಯುತ್ತರಅಳಿಸಿಧನ್ಯವಾದಗಳು ಪರೇಶ್ ಸರ್....
ಅಳಿಸಿಕಥೆ ಚೆನ್ನಾಗಿದೆ. ಇನ್ನೂ ಹೆಚ್ಚಿನ ಕಥೆಗಳು ಮೂಡಿ ಬರಲಿ. ಯುವ ಜನಾಂಗಕ್ಕೆ ಬೆಳಕ ತೋರಿಸುವ ಕಥೆಗಳು ಸಮಯೋಚಿತವೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್...
ಅಳಿಸಿತುಂಬಾ ಚೆನ್ನಾಗಿದೆ ಕಥೆ. ಯುವ ಜನರಿಗೆ ಈ ಕಥೆ ಜಾಗೃತಿ ಮೂಡಿಸುವ ಕಥೆಯಾಗಿದೆ. ಒಳ್ಳೇ ಪ್ರಯತ್ನ ಹೀಗೆ ಕಥೆಗಳು ಬರಲಿ.
ಪ್ರತ್ಯುತ್ತರಅಳಿಸಿ